Friday, March 3, 2017

ರಾಯಚೂರಿನ ಕೋಟೆ




ರಾಯಚೂರಿನಲ್ಲಿದ್ದ ಪ್ರಾಚೀನ ನುತ್ತು, ಐತಿಹಾಸಿಕ ಸ್ಮಾರಕಗಳಲ್ಲಿ ಆತಿ ಮಹತ್ವದ್ದೆಂದರೆ ೮೦೦ ವರ್ಷಗಳ ಹಿಂದಿನ ಆಲ್ಲಿಯ
ಕೋಟೆ. ಆದರ ಚಿತ್ರವನ್ನು ಮೇಲೆ ಕೊಡಲಾಗಿದೆ. ರೂಢಿಯ ಮಾದರಿಯ ಮೇಲೆ ಇದನ್ನು ಕಟ್ಟದ್ದರೂ ಇದರಲ್ಲಿ ಎಷ್ಟೋ
ವೈಶಿಷ್ಟ್ಯಗಳಿನೆ. ಇದರ ೩ ಕಡೆಗೆ ಎತ್ತರವಲ್ಲದ ಆದರೆ ಬಹು ಬಲಿಷ್ಠನಾದ ಎರಡು ಸುತ್ತುವಲಯಗಳಿನೆ- ನಾಲ್ಕನೆಯ
ಕಡೆಯೆಂದರೆ ದಕ್ಷಿಣದಲ್ಲಿ ಚಿತ್ರಮಯನಾದ ೩ ಬೆಟ್ಟಗಳ ಸಾಲುಗಳಿನೆ. ಆವುಗಳ ಮೇಲೆ ಬಲಿಪ್ಥದಾದ ಕೋಟಿ ಗೋಡೆಗ
ಳನ್ನು ಕಟ್ಟಲಾಗಿದೆ. ಮಧ್ಯದ ಬೆಟ್ಟವು ಬಹಳ ಎತ್ತರನಾದುದು- ಇದರ ಮೇಲೆ ಒಂದು ಗುಡೆ ಮತ್ತು ವಿಜಾವುರ ಕೈಲಿಯ
ಒಂದು ಚಿಕ್ಕ ಮಸೀದೆ ಇದೆ.

ಮುನ್ನೆಲದ ಮಧ್ಯದಲ್ಲಿ ಕಾಣುವ ಎರಡು ಗೋಡೆಗಳ ಪೈಕಿ ಒಳಗಿನ ಗೋಡೆಯನ್ನು ಜೆನ್ನಾಗಿ ಕೆತ್ತಲಾದ ದೊಡ್ಡ ದೊಡ್ಡ
ಕಲ್ಲುಗಳಿಂದ ಸುಂದರನಾಗಿ ಜೋಡಿಸಿ ಕಟ್ಟಲಾಗಿದೆ, ಗಚ್ಚು ಅಥವಾ ಸಿಮೆಂಟಿನಿಂದ ಕಲ್ಲುಗಳನ್ನು ಜೋಡಿಸಿಲ್ಲ. ಪೌಳಿಯ
ಪಶ್ಚಿಮ ಭಾಗದಲ್ಲಿ ಜೋಡಿಸಲಾದ ೪೧ ಅಡಿ ೮ ಅಂಗುಲ ಉದ್ದವಿದ್ದ ದೊದ್ದ ಕಲ್ಲಿನಮೇಲೆ ಬರೆದ ಕನ್ನಡದ ದೀರ್ಘವಾದ
ಶಾಸನದ ಪ್ರಕಾರ ಇದು ಹಿಂದುಗಳು ಕಟ್ಟಸಿದ್ದೆಂದು ತಿಳಿವುದು. ಈ ಶಾಸನದಲ್ಲಿ ರಾಯಚೂರ ವಿಜಯ ಮತ್ತು, ವರಂಗಲ್ಲಿನ
ಒಡತಿಯಾದ ರಾಣಿ ರುದ್ರಮ್ಮನು ತನ್ನ ಆಳಿಕೆಯ ಕ್ರಿ. ಶ. ೧೨೯೮ ನೆಯ ಇಸ್ಥಿಯಲ್ಲಿ ಈ ಕೋಟೆಯನ್ನು ಕಟ್ಟಸಿದ ವಿಷಯ
ಬರೆದಿದೆ. ಈ ಕಲ್ಲ ಬಲಗಡೆಗೆ ಸ್ವಲ್ಪದೂರದಲ್ಲಿ ಇನ್ನೊಂದು ಕಲ್ಲಿದೆ. ಇದರ ಚಿತ್ರವನ್ನೂ ಇಲ್ಲಿ  ಕೊಡಲಾಗಿದೆ.



ಶಾಸನವನ್ನು ಕೊರೆದ ಈ ದೊಡ್ಡ ಕಲ್ಲನ್ನು ಕಲ್ಲು ಹುಟ್ಟುವ ಸ್ಥಳ ದಿಂದ ಇಲ್ಲಿಯ ವರೆಗೆ ಗ ಟ್ಟಿ ಗಾ ಲಿ ಯ ಬಂಡಿಯ ಮೇ ಲೆ
ಎಷ್ಟೋ ಕೋಣಗಳಿಂದ ಹೇಗೆ ಎಳೆದು ಕೊಂಡು ತರಲಾಯಿತೆ೦ಬ ಮತ್ತು ಬಂಡಿಯನ್ನು ಮನುಷ್ಯರು ಹೊಡೆಯುತ್ತ ಕೋಣಗಳನ್ನು ಬಡಿಗೆಯಿಂದ ಸದೆಯುತ್ತಿರುವ ನುತ್ತು, ಬಂಡಿಯನ್ನು ಮುಂದಕ್ಕೆ ನುಗ್ಗಿಸುವುದಕ್ಕಾಗಿ ಗಾಲಿಗಳಿಗೆ ಸೊನ್ನೆ ಕೋಲನ್ನು ಹಾಕುತ್ತಿರುವ ಒಂದು ಸುಂದರ ಚಿತ್ರವನ್ನು ಆ ಕಲ್ಲ ಮೇಲೆ ನೋಡುವಿರಿ. ಮ.ಘ-ಪ. ನಿಜಾಮರನರ ಸರಕಾರದ ಪ್ರಾಚೀನ ವಸ್ತು ಸಂಶೋಧನಾ ಖಾತೆಯ ಸಹಾಯಕ ಮುಖ್ಯಾಧಿಕಾರಿಗಳಾಗಿದ್ದ ಮಿ. ಸೈಯದ್ ಯೂಸಫ್ ಅವರು ಈ ಕೋಟೆಯನ್ನು ಪರಿಶೀಲಿಸಿ ಈ ಕೆತ್ತನೆಯ ಪ್ರತಿಮಾಡಿದರು. "ಕೋಣಗಳ ಸಾಲುಗಳನ್ನು ಬಹಳ ಸುಂದರನಾಗಿ ಚಿತ್ರಿಸಲಾಗಿದೆ- ಅವುಗಳಿಗೆ ಆಗುತ್ತಿರುವ ಆಯಾಸನ್ನು ಕೆಲವುಗಳ ನಾಲಗೆಯನ್ನುಹೊರಚಾಚಿದಂತೆ ಚಿತ್ರಿಸಿ ನುತ್ತೆ ಕೆಲವುಗಳ ಸೊಂಟವನ್ನು ಬಗ್ಗಿದಂತೆ ಚಿತ್ರಿಸಿ ಉಳಿದುವುಗಳ ಬಾಲಗಳು ಸಸುರುಳಿಸುತ್ತಿ ಮೇಲಕ್ಕೆ ಎದ್ದಂತೆ ಚಿತ್ರಿಸಿ ಕಣ್ಣಿಗೆ ಕಟ್ಟುವಂತೆ ಮನೋಹರನಾಗಿ ಕೊರೆಯಲಾಗಿದೆ. ಕೋಣಗಳ ಮೇಲೆ ಹೆಚ್ಚಿನ ಭಾರ ಬಿದ್ದಾಗ ಸಾಮಾನ್ಯವಾಗಿ ಅವು ಹೀಗೆಯೆ ವರ್ತಿಸುವುವು. ಖಂಡಿತವಾಗಿ ಇದು ರೇಖಾವಿದ್ಯೆಯ ಸೋಜಿಗವನ್ನು ಸೂಚಿಸ3ವುದು. ಅದರಲ್ಲೂ ಇದನ್ನು ಚಿತ್ರಿಸಿದಕಾಲವನ್ನು ಲಕ್ಷ್ಯಕ್ಕೆ ತಂದಾಗ ಸೋಜಿಗವು ಮತ್ತಷ್ಟು ಹೆಚ್ಚುವುದು " ಎಂದ3 ಮಿ. ಸೈಯದ್
ಯೂಸಫ್ ಅವರು ಹೇಳಿದ್ದಾರೆ. ಇನ್ನೂ ಬಲಭಾಗಕ್ಕೆ ಮೂರನೆಯ ಕಲ್ಲೊಂದಿದೆ. ಅದರ ಮೇಲೆ ಅತ್ಯಲಂಕೃತವಾದ
೬ ರಥಗಳ ಮೆರವಣಿಗೆಯನ್ನು ಕೊರೆಯಲಾಗಿದೆ. ಕುತ್ತಿಗೆಯ ಸುತ್ತು, ಇರುನ ಸುಂದರವಾದ ಕೊರಳಪಟ್ಟಯಿಂದ ರಂಜಿಸುನ
ದೊಡ್ಡ ಇಣಿಯ ಎತ್ತು,ಗಳು ಆವನ್ನು ಎಳೆಯತ್ತಿರುವುವು- ಇದರಂತೆ ಕೆತ್ತಲಾದ ಇನ್ನೂ ಎಷ್ಟೋ ಕಲ್ಲುಗಳಿನೆ. ಕೆಲವುಗಳ
ಮೇಲೆ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಇನ್ನೂ ಕೆಲವು ಹೂಬಳ್ಳಿಗಳಿಂದ ಕೂಡಿವೆ ಅಥವಾ ಪಕ್ಷಿ ನುತ್ತು, ಪ್ರಾಣಿ
ಗಳಿ ಚಿತ್ರಗಳಿಂದ ಇಲ್ಲನೆ ಮನುಷ್ಯರ ನಾನಾ ನಿನಾಕ್ಟ~ಕ್ರಿಸಗಳಿಂದ ಕೂಡಿವೆ.

ಕೋಟಿಯ ಹೊರವಲಯವನ್ನಾದರೊ ಹೆಚ್ಚು ಕಾಡಾದ ಕಲ್ಲುಗಳಿಂದ ಕಟ್ಟಲಾಗಿದೆ, ಇದನ್ನು ಕಟ್ಟಿದವರು ಮಹ
ಮ್ಮದೀಯರು. ಹುಡೆಗಳು, ಬಾಗಿಲಗಳು ಮತ್ತು ಊರ ಮಸೀದೆಗಳ ಮೇಲೆ ಕೆತ್ತಲಾದ ಅರಬಿ ಮತ್ತು ಫಾರಸಿ ಭಾಷೆಯ
ನಾನಾ ಶಾಸನಗಳಿಂದ ಈ ಸಂಗತಿ ತಿಳಿವುದು. ಆಮೇಲಿನ ಬಹಮನಿಗಳು ನುತ್ತು ವಿಜಾಪುರದ ಆದಿಲ್ ಷಾಹಿಗಳು ಕಟ್ಟಿದ
ನಾನಾ ಕಟ್ಟಡಗಳ ಸ್ಮಾರಕಾರ್ಥವಾಗಿ ಈ ಶಾಸನಗಳನ್ನು ನಿಲ್ಲಿಸಲಾಗಿದೆ.

ಈ ಲೇಖನವನ್ನು ಹಳೆಯ ಹೈದರಾಬಾದ ಸಂಸ್ಥಾನದ ಸರ್ಕಾರದಿಂದ ಪ್ರಚುರವ಻ಗುತ್ತಿದ್ದ ಹೈದರಾಬಾದ ಸಮಾಚಾರ 1941 ನೇ ಇಸವಿಯ ಪತ್ರಿಕೆಯಿಂದ ಉದ್ಧರಿಸಲಾಗಿದೆ. 


No comments: