Sunday, October 16, 2011

ಉಪ ಕಥೆಗಳು

ಉಪ ಕಥೆಗಳು ಎನ್ನುವ ಹೆಸರು ಮುಖ್ಯ ಕಥೆಗಳ ಮಧ್ಯೆ ಅದಕ್ಕೆ ಪೂರಕವಾಗಿ ಬರುವ ಸಣ್ಣ ಕಥೆಗಳು. ಒಮ್ಮೊಮ್ಮೆ ಅವು ಮನದೊಳಗೆ ನಿಂತು ಬಿಡುತ್ತವೆ. ಏಕೆಂದರೆ ಅವು ಸಣ್ಣದಾಗಿದ್ದರೂ ಬಹಳ ಆಕರ್ಷಕ ವಾಗಿರುತ್ತವೆ. ಇತ್ತೀಚೆಗೆ ನಾನು ಒಂದು ಉಪನ್ಯಾಸ ಕೇಳುತ್ತಿದ್ದಾಗ ನನ್ನನ್ನು ಮಾರು ಗೊಳಿಸಿದ ಒಂದು ಅತೀ ಸಣ್ಣ ಉಪಕಥೆ ಇಲ್ಲಿ ಬರೆಯುತ್ತಿದ್ದೀನಿ. ಚಿಕ್ಕ ಮಕ್ಕಳೂ ಬುದ್ಧಿವಂತರಾಗಿರುತ್ತಾರೆಂಬುದನ್ನು ಉದಹರಿಸಲು ಹೇಳಿದ್ದು. ಇನ್ನೂ ವಿದ್ಯುತ್^ಚ್ಛಕ್ತಿ ಇಲ್ಲದ ಮನೆಯೊಂದರಲ್ಲಿ ಒಂದು ಸಂಜೆ ಆ ಮನೆಯ ಹುಡುಗಿ ಅಡಿಗೆ ಮನೆಯಿಂದ ಹಜಾರಕ್ಕೆ ಒಂದು ಹಚ್ಚಿದ ಹಣತೆ ತರುತ್ತಿದ್ದಾಗ ಅಲ್ಲಿದ್ದ ಅಜ್ಜನಿಗೆ ಹುಡುಗಿಗೆ ಬೆರಗು ಮಾಡಬೇಕೆನಿಸಿತು. ನಿನ್ನನ್ನು ಒಂದು ಪ್ರಶ್ನೆ ಕೇಳುತ್ತೇನೆ ನಿನ್ನಲ್ಲಿ ಉತ್ತರ ಇದೆಯೇ ಎಂದ. ಹೂ ಕೇಳು ಎಂದಳು ಹುಡುಗಿ. 'ಈ ದೀಪವನ್ನು ಹೊತ್ತಿಸಿದ ದೀಪ ಮೊದಲು ಎಲ್ಲಿಂದ ಬಂತು - ಹೇಳು ನೋಡೋಣ' ಅಂತ ಕೇಳಿದ ಅಜ್ಜ. ಆ ಹುಡುಗಿ ಒಂದು ಕ್ಷಣ ತಬ್ಬಿಬ್ಬಾದರೂ ಮರು ಕ್ಷಣ ಏನೋ ಹೊಳೆದವಳಂತೆ ಆ ಹಣತೆಯ ದೀಪವನ್ನು ಉಫ್ ಎಂದು ಆರಿಸಿ 'ಈ ದೀಪ ಎಲ್ಲಿಗೆ ಹೋಯಿತೋ ಅಲ್ಲಿಂದ' ಅಂದಳಂತೆ. ನಿಜಕ್ಕೂ ಚುರುಕು ಉತ್ತರ ಅಲ್ವೇ.

Thursday, September 1, 2011

ಗಣಪತಿ ಮೂರ್ತಿ ಆರಿಸಲು

ನಾನು ಗಣಪತಿ ಹಬ್ಬಕ್ಕೆ ಗಣಪತಿಯನ್ನು ಕೊಂಡುಕೊಂಡು ಬರಲು ಹೋಗಿದ್ದಾಗ ಒಬ್ಬ ಮಿತ್ರರೂ ಅದೇ ಕಾರ್ಯ ನಿಮಿತ್ತ ಪೇಟೆಗೆ ಬಂದಿದ್ದಾಗ ಸಿಕ್ಕಿದ್ದರು. ಗಣಪತಿಗಳ ಮಾರಾಟದ ಅಂಗಡಿಯ ಮುಂದೆ ನಿಂತು ಮೂರ್ತಿಗಳನ್ನು ನೋಡಿ ನೋಡಿ ಆರಿಸಲು ಆಗದೇ ಅವರು ಏನೋ ಪೇಚಾಟದಲ್ಲಿದ್ದಂತೆ ಕಾಣಿಸಿತು. ನನ್ನನ್ನು ನೋಡಿದ ಕೂಡಲೇ ಅವರು ಸ್ವಲ್ಪ ಮುಜುಗರಕ್ಕೆ ಸಿಕ್ಕಿದಂತೆ ವರ್ತಿಸಿದರು ಮತ್ತು ಅಲ್ಲಿಂದ ಬೇರೊಂದು ಅಂಗಡಿಗೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲಿ ಏನನಿಸಿತೋ ನನ್ನೊಡನೆ ಹೇಳಲು ಪ್ರಾರಂಭಿಸಿದರು. ‘ನಾನು ಬಹಳ ಹುಡುಕಿದರೂ ತಿಲಕ ಇರುವ ಗಣಪತಿ ಸಿಗುತ್ತಿಲ್ಲ; ಎಲ್ಲಕ್ಕೂ ವಿಭೂತಿ ಇದೆ. ನಮಗೆ ಅದು ಸರಿಹೋಗಲ್ಲ. ಅಂದರು. ಹಾಗೂ ಇದೆಯೇನ್ರಿ ಅಂತ ಕೇಳಿದೆ. ಹೌದು ಹೌದು. ನಾನು ಪ್ರತಿ ವರ್ಷವೂ ಅದನ್ನೇ ಕೊಳ್ಳುವುದು. ಆದರೆ ಮಾರುಕಟ್ಟೆಯಲ್ಲಿ ಅದರ ಸಂಖ್ಯೆ ಕಡಿಮೆ ಅಂದರು. ನನಗೆ ಗಣಪತಿಗೆ ಹಣೆಗೆ ಏನು ಹಚ್ಚಿರಬೇಕೆಂಬುದರ ವಿಷಯ ಅಲ್ಲಿಯವರೆಗೂ ತಿಳಿದಿರಲಿಲ್ಲ. ಅವರು ವೈಷ್ಣವ ಸಂಪ್ರದಾಯದವರು. ಹಾಗಾಗಿ ಅವರಿಗೆ ವಿಭೂತಿ ಆಗಿ ಬರದು. ಹಬ್ಬದ ದಿವಸ ವ್ರತದ ಕಥೆಯನ್ನು ಓದುತ್ತಿದ್ದಾಗ ಈ ಕೆಳಗೆ ಉದ್ಧರಿಸಿರುವ ಭಾಗ ನನ್ನ ಗಮನಕ್ಕೆ ಬಂತು: ಅವರವರು ತಮ್ಮ ತಮ್ಮ ಶಕ್ತಿಗನುಸಾರವಗಿ ಭಂಗಾರದಿಂದ ಅಥವ ಬೆಳ್ಳಿ, ತಾಮ್ರಗಳಿಂದ ಗಣಪತಿಯನ್ನು ಮಾಡಿಸಿ ಪೂಜೆಯಾದನಂತರ ಅದನ್ನು ಬ್ರಾಹ್ಮಣನಿಗೆ ದಾನ ಮಾಡತಕ್ಕದ್ದು. ಅಷ್ಟಕ್ಕೂ ಅನುಕೂಲವಿಲ್ಲದವರು ಮಣ್ಣಿನಿಂದ ಗಣಪತಿಯನ್ನು ಮಾಡಿ ಪೂಜಿಸಬಹುದು. ಶಕ್ತಿಯಿದ್ದರೂ ಲೋಭಿತನವನ್ನು ಮಾಡಬಾರದು. ಆ ಗಣಪತಿಯು ಏಕದಂತನೂ ಮೊರದಂತೆ ಅಗಲವಾದ ಕಿವಿಯುಳ್ಳವನೂ ಚತುರ್ಭುಜಗಳಿಂದ ಕೂಡಿದವನೂ ಒಂದು ಕೈಯಿಂದ ಪಾಶವನ್ನೂ ಮತ್ತೊಂದು ಕೈಯಿಂದ ಅಂಕುಶವನ್ನೂ ಬೇರೊಂದು ಕೈಯಿಂದ ಪಾಶವನ್ನೂ ಬೇರೊಂದು ಕೈಯಲ್ಲಿ ಕಡುಬನ್ನೂ ಇನ್ನೊಂದು ಕರದಿಂದ ಅಭಯಮುದ್ರೆಯನ್ನು ಉಂಟಾಗಿರುವಂತೆಯೂ ಇರಬೇಕು.ಈ ರೀತಿಯಾಗಿರತಕ್ಕ ವಿನಾಯಕ ಸ್ವಾಮಿಯನ್ನು ಉತ್ತಮೋತ್ತಮ ಭಕ್ತಿಯಿಂದ ಆರಾಧಿಸಬೇಕು (ಆಧಾರ: ‘ವ್ರತಮಾಲಾ’ ಪ್ರಕಟಣೆ: ಶ್ರೀ ಸರಸ್ವತಿ ರತ್ನಾಕರ ಬುಕ್ ಡಿಪೋ ಅವೆನ್ಯೂ ರಸ್ತೆ ಬೆಂಗಳೂರು-೨) ಅದೇಕೋ ಗ್ರಂಥಕರ್ತರು ಲಲಾಟ ಲಾಂಛನದ ಬಗ್ಗೆ ಗಮನಿಸಿಲ್ಲ. ಈಗ ನಿಯಮಗಳನ್ನು ಗಾಳಿಗೆ ತೂರಿಬಿಟ್ಟು ಗಣೇಶನಿಗೆ ಏನೇನೋ ರೂಪ ಕೊಟ್ಟು ತಮ್ಮ ಕಲಾ ಕೌಶಲ್ಯವನ್ನು ಕುಶಲ ಕರ್ಮಿಗಳು ತೋರಿಸುತ್ತಿದ್ದಾರೆ. ನಮ್ಮ ನಮ್ಮ ಅವಶ್ಯಕತೆ ನಮಗೆ ಅಷ್ಟೇ.

Monday, May 30, 2011

ಎರಡು ಮುಖ

ಇದು http://www.chilume.com/2011/05/kannada-poem-yeradu-mukha-by-mns-rao.html ಅಲ್ಲಿ ಪ್ರಕಟವಾಗಿದೆ.

ಎರಡು ಮುಖ
- ಎಂ.ಎನ್.ಎಸ್. ರಾವ್

ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ

ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ
ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ
ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ ಕಾನೂನು ಅಡ್ಡಿ
ಆದರೂ ಅದನ್ನು ಬಿಟ್ಟು ಬದುಕೋದು ಅವರಿಗೆ ಹೇಗೆಂದು ಗೊತ್ತಿಲ್ಲ

ರೈತರಿಗೆ ತಂಬಾಕೇ ಬೆಳೀಬೇಡಿ ಅಂದ್ರೆ ಅವರು ದುಡ್ಡು ಮಾಡೋದು ಬೇಡವೇ
ತಂಬಾಕೇ ಬೆಳೀದ್ರಿದ್ರೆ ಸರ್ಕಾರ ಸುಂಕ ಹಾಕದೇ ದೇಶ ಅಭಿವೃದ್ಧಿ ಹೇಗೇ
ಬೆದುರು ಬೊಂಬೆ ಚಿತ್ರ ಸಿಗರೇಟು ಪ್ಯಾಕ್ ಮೇಲೆ ಮುದ್ರಿಸಿದರೆ ಸಾಕೇ
ಸುಂಕ ಹಾಕಲು ಬೇರೇನು ಇಲ್ಲವೆ ತಂಬಾಕು ಬೆಳೆ ನಿಲ್ಲಿಸೋದು ಹೇಗೇ

Wednesday, May 18, 2011

"ಥಟ್ ಅಂತ ಹೇಳಿ"


ನಾನು ದೂರದರ್ಶನದ ಚಂದನ ವಾಹಿನಿ ನಡೆಸಿಕೊಡುವ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಾನು ಒಂದು ಪ್ರಶ್ನೆಯನ್ನು ಸಾರಿಯಾಗಿ ಉತ್ತರಿಸಿ ಒಂದು ಪುಸ್ತಕ ಗೆದ್ದೆ. ಆಮೇಲೆ ಒಂದು ಪ್ರಶ್ನೆಗೆ ಆಯ್ಕೆ ಬರುವ ಮುನ್ನ ಉತ್ತರಿಸಲು ಪ್ರಯತ್ನಿಸಿ ತಪ್ಪು ಉತ್ತರದಿಂದಾಗಿ ಅದನ್ನು ಕಳೆದು ಕೊಂಡೆ. ಇನ್ನೊಂದು ಪ್ತಶ್ನೆಗೆ ಸರಿ ಉತ್ತರ ಕೊಟ್ಟರೂ ಮೂರನೆಯವನಾಗಿದ್ದರಿಂದ ಏನೂ ಅಂಕ ಬರಲಿಲ್ಲ. ಆದರೂ ಅದೊಂದು ಅನುಭವ.

Sunday, April 17, 2011

Talakaveri trip 2011

Samba deer@ Nagarahole-101_2460Bhagamandala-101_2459Bhagamandala-101_2458Temple-Bhagamandala-101_2457Samba deer@ Nagarahole-101_2461SDC13059
SDC13058SDC13057SDC13056SDC13055SDC13054SDC13053
SDC13052SDC13051SDC13050SDC13049SDC13048SDC13047
SDC13046SDC13045SDC13044SDC13043SDC13041SDC13040

Talakaveri trip 2011, a set on Flickr.

Some memories of Talakaveri trip April 2011

Monday, February 7, 2011

New and old

We under took a tour of Badami, Pattadakal and Aihole. These places were earlier the center of Chalukya's kingdom. Wonderful monuments will remain in our memory for a long time because of their grandeur, beauty and size. Our guide was often pointing out that the so called present day hair-style of belles is nothing new.




Even the design of the Parliament House is resembling a structure in Aihole.

I have clicked more photos during the trip and they can be viewed here

Thursday, January 13, 2011

Google gives me stuff to write

In my last post I had lamented that I didn't utilise an opportunity of writing in the blog of a novelty adopted by Google I noticed. Again today Google has repeated the trick, may be in India only. May be if frequency of such gimmicks increases it may lose attraction.

Moving the mouse over the logo shows Makara sankranti. In Gujarat kite flying festival is observed on this day and Google has tried to symbalise Makara sankranti with it.

This logo with Kite flying is symbolic of Makara sankranti observed in India on January 14. In most parts of India, predominantly agricultural country, it is harvest season and all festivals are are related to seasons and religion. Talking of seasons Tropic of Capricorn in India is opposite of mid-Summer in southern hemisphere.