Monday, May 4, 2015

ಕಾಲ

ಕಾಲ

ನಮ್ಮ ಅಮ್ಮ ನನಗೆ ಶಾಲೆಗೆ ಹೋಗುವಾಗ ಹೊತ್ತಿಗೆ ಬಹಳ ಮುಂಚೆ ಹೊರಟರೆ "ಅಲ್ಲಿ ನೀನು ಕೊಠಡಿಯ ನೆಲಗುಡಿಸಲು ಹೋಗುತ್ತೀಯಾ?" ಎಂದು ತಡೆಯುತ್ತಿದ್ದರು. ಸ್ವಲ್ಪ ಮುಂಚೆ ಹೋಗಿ ತರಗತಿ ಪ್ರಾರಂಭವಾಗುವುದಕ್ಕೆ ಮೊದಲು ಗೆಳೆಯರೊಡನೆ ಮಾತೋ ಅಟವೋ ಇಟ್ಟುಕೊಳ್ಳುವ ಆಸೆ. ಈಗ ಅನಿಸುತ್ತಿದೆ, ನಮ್ಮ ಅಮ್ಮ ಹಾಗೆ ಅನ್ನುತ್ತಿದ್ದ ಕಾರಣವೇ ಬೇರೆ. ಅವಳಿಗೆ ನಮಗೆ ಊಟ ತಯಾರುಮಾಡಲು ಅವಳು ಆತುರ ಪಡಬೇಕಾಗಿತ್ತೇನೋ! ಅದರ ಸಂಬಂಧ ಅವಳಿಗೆ ಏನೇನು ಅಡಚಣೆಗಳಿದ್ದವೋ ನಮಗೆ ಗೊತ್ತಿರಲಿಲ್ಲ.

ಈಗ ನಾನು ನನ್ನ ಹೆಂಡತಿಯನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಲು ಮುಂಚೆಯೇ ತಿಳಸಿದೆ ಎಂದಿಟ್ಟುಕೊಳ್ಳಿ. ಅವಳು ಹಾಕುವ ಮೊದಲ ಕಟ್ಟು: ನೀವು ನನ್ನನ್ನು ಬೇಗ ಹೊರಡಲು ಅವಸರಿಸಬಾರದು. ಎಲ್ಲರಿಗಿಂತ ಮೊದಲು ಹೋಗಿ ನಾವು ಅಲ್ಲಿ ಏನು ಮಾಡಬೇಕಾಗಿದೆ?

ಈ ತರಹದ ಸಮಸ್ಯೆಗಳು ನಮ್ಮ ಭಾರತದ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಾಣುತ್ತಿರುವುದರಿಂದ ನಮ್ಮ ಕಾಲವನ್ನು ಅನುಸರಿಸದೇ ಇರುವ ನಡುವಳಿಕೆ 'ಇಂಡಿಯನ್ ಸ್ಟಾಂಡರ್ಡ್ ಟೈಮ್‌' ಎಂಬ ಕುಹಕ ನಾಮಧೇಯವಿದೆ.  

ನಾವು ನಿಧಾನಗತಿಯವರು; ಯಾವುದಕ್ಕೂ ಆತುರವಾಗಲೀ, ಆತಂಕವಾಗಲೀ, ಅಂಟುಕೊಡವರಾಗಲೀ ಇಲ್ಲ ಎನ್ನು ಖ್ಯಾತಿಗಳಿಸಿದ್ದೇವೆ. ನಮ್ಮ ತಂದೆಯವರ ಕಾಲದಲ್ಲಿ ಮೈಸೂರು ಸರ್ಕಾರದ ಕಛೇರಿಗಳು ಅಧಿಕೃತವಾಗಿ 11 ಗಂಟೆಯಿಂದ 5 ಗಂಟೆ ವರೆಗೆ ಇರುತ್ತಿದ್ದವು. ಈಗ ನೋಡಿ ಕರ್ನಾಟಕ ಸರ್ಕಾರದ ಕಛೇರಿಗಳು 10 ರಿಂದ 5.30 ವರೆಗೆ ನಡೆಯುತ್ತವೆ. ಆಗ ಕೆಲಸವು ಕಡಿಮೆ ಇದ್ದವೆಂತಲೋ ಅಥವಾ ಸಂಬಳ ಕಡಿಮೆ ಇತ್ತು ಎಂತಲೋ ಕಛೇರಿಯ ಕೆಲಸದ ಒಟ್ಟು ಸಮಯ ಸೀಮಿತವಾಗಿತ್ತು. ಈಗ ಕೆಲಸ, ಸಂಬಳ ಎರಡೂ ಹಿಗ್ಗಿವೆ. ನಾವೂ ಈಗ ನಿಧಾನಗತಿಯವರಲ್ಲ ಅಲ್ಲವೆ. ಕಛೇರಿಗೆ ತಡವಾಗಿ ಬಂದ ಒಬ್ಬ ನೌಕರನು ಕೊಟ್ಟ ವಿವರಣೆಗೆ ಮೇಲಧಿಕಾರಿ ಹೇಳದ್ದೇನು ಗೊತ್ತೇ? ಇರುವ ಎಲ್ಲಾ ಅಡಚಣೆಗಳನ್ನೂ ಗಮನದಲ್ಲಿಟ್ಟುಕೊಂಡು ಕಛೇರಿ ತಲುವ ಸಮಯಕ್ಕೆ ಸರಿಯಾಗಿ ತಲುವಹಾಗೆ ನಿಮ್ಮ ವೇಳಾಪಟ್ಟಿ ಬದಲಿಸಿಕೊಳ್ಳಿ. ಹೌದು ನಮಗೆ ಗುರಿ ನಿಶ್ಚಯಿಸಿಕೊಳ್ಳುವ ಮನಸ್ಸು ಬೇಕು! ಯಾವುದನ್ನೂ ಆದರೆ ಈಚೆಗೆ ನಮ್ಮ ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿ ಕಾಲವನ್ನು ಹರಣಮಾಡುವ ಹಾಗೇ ಇಲ್ಲ. ಮಾಡಿದರೆ ಯಾವುದಕ್ಕೋ ಅಗತ್ಯ ಬಿಟ್ಟುಹೋಗುತ್ತದೆ. ಹಾಗಾಗಿ ಕಾಲಹರಣದ ಪ್ರವೃತ್ತಿಗಳು ಇಳಿಮುಖವಾಗುತ್ತಿವೆ.

ಕಾಲ ಯಾರಿಗೂ ಕಾಯುವುದು ಇಲ್ಲ. ಅದು ಯಾವಾಗಲೂ ಮುಂದೆ ಮುಂದೆ ಹೋಗುತ್ತಲೇ ಇರುತ್ತದೆ. ಹೀಗಾಗಿ ಕಳೆದು ಹೋದದ್ದು ಹೋಗಿಯೇ ಬಿಟ್ಟಿತು ಎಂಬುದನ್ನು ತಿಳಿಯಬೇಕು.   

Tuesday, February 24, 2015

ಚಿಲುಮೆ ಯ ಹಳೆಯ ಪೋಸ್ಟ್‌ಗಳು ಇಲ್ಲಿವೆ

Sunday, July 27, 2014

ಒಂದು ಜುಮ್‌ ಅಂದಹಾಗೆ.


ಇಲ್ಲಿ ಇರುವ ಮಾರ್ಗ ಸೂಚಿ ನೋಡಿ; ನನಗೆ ಅನ್ನಿಸಿದ್ದು; ಕಲಾತ್ಮಕ, ವಿವರಪೂರ್ಣ, ಆಕರ್ಷಕ, ವೈವಿಧ್ಯ, ನವೀನ, ಮನಸೆಳೆವ, 
ಮುಖ್ಯವಾದ ವಿಚಾರ ಭೂಕಂಪದ ಪ್ರಭಾವದ ಅವಶೇಷ. ಇದು ಅಮೇರಿಕಾದ ಕ್ಯಾಲಿಫೋರ್ನಿಯಾದ ಮ್ಯಾಮತ್ ಪರ್ವತಗಳಲ್ಲಿ.
ನಾವು ಅದನ್ನು ನೋಡಿದಾಗ ಮೈ ಜುಂ ಅಂದಿತು.


Wednesday, June 11, 2014





This profile is published in the house magazine of Jnanaiyothi  Bangalore of which we are members


Born to G.Naniappa & Lakshminarasamma in Kanakapura, Bangalore, Sri Satyanarayana Rao
after completing his B.Sc. from the Central College, Bangalore joined the P&T Dept. After training. in Engineering Supervision for one year, he was posted as Engineering Supervisor, Telegraphs and rose to the rank of Deputy General Manager, Telecom ,when he retired in ‘I993. He has worked in places like Junagadh, Hubli, Bangalore, Chicmagalur, Hyderabad, Vishakhapatnam & Kozikode.

After retirement he evinced interest in Computers & is now engaged in helping digitalising Kannada books in
text format for the website , a voluntary organisation to popularise Kannada
literature on the web. He has scanned, OCRed and corrected the mistakes in machine OCR texts of more
than 10000 pages of Kannada books. Besides this,he has also attended Vedaparayana classes for ten
years , attends spiritual lectures regularly. He appreciates the programs- medicalcamps.
of Jnanajyothi —especially,

Born to N.Nagaraiarao & Sharada, in our own Bangalore, Raialakshmi iustifiably prides in calling
herself a homemaker who has dedicated all her time to her husband to go up in his career & making her
daughters good professionals & citizens. Her hobbies are cooking, crafts & listening to good music.

The Raos have two daughters who are software engineers settled in San Jose, USA:

1) Nityaprabha Somayaii-- is married to Venkatesh Somayaii, a software engineer& they have two
children: Medha & Mihir.

2) Nikhila Modi --is married to Harith Modi, a software engineer & they have two children: Taarika
& lshika. '

Jnanaiyothi wishes the Raos a long, healthy 8.
peaceful life. _
--—Shanta Navaratna Laxman

Friday, May 9, 2014

ಗೌರವ.


ಗೌರವ ಕೊಟ್ಟು ಗೌರವ ಪಡಿ; ಆಗ್ರಹದಿಂದಲ್ಲ ಎಂಬ ಹೇಳಿಕೆ ಬಹಳ ಪ್ರಚಾರದಲ್ಲಿದೆ. ಗೌರವ ಅಂದರೇನು ಎಂದು ನಾನು ಮನಸ್ಸಿನಲ್ಲಿ ಯೋಚಿಸುತ್ತದ್ದಾಗ ಅಸಡ್ಡೆಯಿಂದ ನೋಡುವುದು ಅಗೌರವ. ಅದಕ್ಕೆ ವಿರುದ್ಧ ಗೌರವ ಅನ್ನಿಸಿತು. 

ಒಂದು ಘಟನೆ ಜ್ಞಾಪಕಕ್ಕೆ ಬಂತು. ನಾನು ಕನ್ನಡಕದ ಅಂಗಡಿಗೆ ಹೋಗಿ ನನ್ನ ಕನ್ನಡಕ ಅಳ್ಳಕವಾಗಿದೆ, ಬಿಗಿ ಮಾಡಿ ಕೊಡಿ ಎಂದು ಕೇಳಿದಾಗ, ನೀವು ಕನ್ನಡಕವನ್ನು ಒಂದು ಕೈಲಿ ಎತ್ತುತ್ತೀರಾ, ಒಂದೇ ಭಾಗಕ್ಕೆ ಭಾರ ಬಿದ್ದು ಅದಕ್ಕೇ ಹೀಗೆ ಆಗುತ್ತೆ ಅಂತ ಅವರು ಹೇಳಿ, ನೀವು ಎರಡೂ ಕೈಲಿ ಕನ್ನಡಕವನ್ನು ಎತ್ತಿ ಹಿಡಿದು ಧರಿಸುವ ಅಭ್ಯಾಸ ಮಾಡಿಕೊಳ್ಳಿ ಎಂದರು. ನಾನು ಕನ್ನಡಕವನ್ನು ಅಸಡ್ಡೆಯಿಂದ (ಅಗೌರವದಿಂದ) ನೋಡುತ್ತಿದ್ದೆ ಎಂದಾಯಿತು.

ಇನ್ನೊಂದು ಘಟನೆ ಜ್ಞಾಪಕಕ್ಕೆ ಬಂತು.  ನಾನು ಒಂದು ಸರ್ತಿ ಆಟೋ ರಿಕ್ಷಾದವರಿಗೆ ಇಪ್ಪತ್ತೈದು ರೂಪಾಯಿ ಕೊಡಬೇಕಾಗಿದ್ದಾಗ ಚಿಲ್ಲರೆ ಇಲ್ಲದೆ ಮೂವತ್ತು ರೂಪಾಯಿ ಕೊಟ್ಟೆ. ಆತ ಚಿಲ್ಲರೆ ಕೊಡುವ ಸೂಚನೆ ಇಲ್ಲದಿದ್ದಾಗ ಐದು ರೂಪಾಯಿ ಕೊಡಿ ಎಂದು ಕೇಳಿದೆ. ಆತ ನನ್ನ ದುರುಗುಟ್ಟಿಕೊಂಡು, ಎಲ್ಲರೂ ಎಷ್ಟೆಷ್ಟೋ ಬಿಟ್ಟುಬಿಡುತ್ತಾರೆ, ಏನು ನೀನು ಐದು ರೂಪಾಯಿ ಬಿಡಲ್ವಾ ಅಂದ. ನಾನು ಐದು ರೂಪಾಯಿ ವಾಪಸ್ಸು ಕೇಳಿದ್ದರಿಂದ, ನಾನು ಗೌರವಕ್ಕೆ ಅಯೋಗ್ಯನಾಗಿ 'ನೀವು' ಇಂದ 'ನೀನು' ಆದೆ.

ನನ್ನ ಸ್ನೇಹಿತರೊಬ್ಬರು ಎದುರಿಗೆ ಸಿಕ್ಕ ಪರಿಚಿತರಿಗೆ ಕೈಜೋಡಿಸಿ ನಮಸ್ಕರಿಸುತ್ತಿದ್ದರು. ಆದರೆ ಅವರ ಎದುರಿನವರು ಕೈಜೋಡಿಸಿ ನಮಸ್ಕರಿಸದಿದ್ದರೆ ಅವರೆ ಬೇಸರವಾಗುತ್ತಿತ್ತು. ಏನು ಗೋಣು ಬಗ್ಗಿಸಿ ಹೋಗಿಬಿಡುತ್ತಾರೆ, ಅವರಿಗೆ ಜಂಭ ಅನ್ನುತ್ತಿದ್ದರು. ಗೌರವ ಸೂಚಿಸುವ ಪದ್ಧತಿಯಲ್ಲಿ ತಮ್ಮದೇ ಸರಿ ಮಾರ್ಗ ಎನ್ನುವುದು ಅವರ ಅನಿಸಿಕೆ. ಇದೂ ಒಂದು ಕೊಂಕು ಅಲ್ಲವೇ?

ಜವಹರ್‌ಲಾಲ್‌ನೆಹರು ಅವರು ಮೊದಲು ಪ್ರಧಾನಿಯಾದಾಗ ಅವರ ಛೇಂಬರಿನ ಕಾವಲಿಗೆ ನೇಮಿಸಿದ್ದ ನೌಕರ ಇವರು ಒಳಹೋಗುವಾಗ, ಹೊರಬರುವಾಗ ಎದ್ದುನಿಂತು ಗೌರವ ಸೂಚಿಸುತ್ತಿದ್ದನಂತೆ. ನೆಹರು ಅವರಿಗೆ ಇದು ಅನವಶ್ಯಕ, ಇದು ಗುಲಾಮಿ ಪದ್ಧತಿ ಅನ್ನಿಸಿತಂತೆ. ಎದ್ದು ನಿಲ್ಲುವುದು ಬೇಡ ಎಂದು ತಾಕೀತು ಮಾಡಿದರಂತೆ. ಆಮೇಲೆ ಬರುಬರುತ್ತಾ ಬಾಗಿಲು ಕಾಯುವವ ಎದ್ದುನಿಲ್ಲುವುದು ನಿಲ್ಲಿಸಿದ್ದು ಅಷ್ಟೇ ಅಲ್ಲ, ಕೂತಲ್ಲೇ ತೂಕಡಿಸುವುದಕ್ಕೆ ಪ್ರಾರಂಭಿಸಿದನಂತೆ. ಅವನು ಮಾಡುತ್ತಿದ್ದುದು ಗೌರವವಷ್ಠೇ ಅಲ್ಲ, ಕರ್ತವ್ಯ ಅನ್ನಿಸಿ ಮೊದಲಿನ ನಿಯಮವನ್ನೇ ಬಳಕೆಗೆ ಮತ್ತೆ ತಂದರಂತೆ.

 

ಮನೆಗೆ ಹೆಸರಿಡು

ಮನೆಗೆ ಹೆಸರು ಇಡುವ ಸಂಭ್ರಮ.

ಜೀವಕ್ಕೆ ಹೆಸರು ಇಡಬೇಕು. ಅದನ್ನು ಇತರರು ಗುರುತಿಸಲು, ಕರೆಯಲು ಹೆಸರು ಬೇಕು. ಮಗುವಿಗೆ ಶೋಡಷ ಸಂಸ್ಕಾರಗಳಲ್ಲಿ ಒಂದಾದ ನಾಮಕರಣವೆಂಬ ಪದ್ಧತಿ ಇದ್ದೇ ಇದೆ.

ಮನೆಗೆ ಹೆಸರಿಡುವ ಗೀಳು ಈಗೀಗ ಹೆಚ್ಚಾಗುತ್ತಿದೆ. ಮನೆಯನ್ನು ಗುರುತಿಸಲು ಪುರಸಭೆಯವರು ಮನೆ ಸಂಖ್ಯೆ ಕೊಟ್ಟಿರುತ್ತಾರೆ. ಅದರ ಜೊತೆಗೆ, ರಸ್ತೆ ಹೆಸರು ಇದ್ದರೆ ಮನೆಯನ್ನು ಸೂಜಿಚುಚ್ಚಿದಂತೆ ಗುರುತಿಸಬಹುದು. ಆದರೂ ಇದು ಸಾಲದೆಂಬಂತೆ ಮನೆಗೆ ಹೆಸರಿಡುವ ಈ ಗೀಳಿಗೆ ಏನೆಂದು ಹೇಳಬೇಕು? ಈಗೀಗ ಗೃಹಪ್ರವೇಶದ ಆಹ್ವಾನಪತ್ರಿಕೆಯಲ್ಲೇ ಆ ಹೆಸರು ನಮೂದಿಸಲಾಗುತ್ತಿದೆ. ಹೆಸರನ್ನು ಆರಿಸುವ ಕಸರತ್ತು ಮಗುವಿನ ಹೆಸರನ್ನು ಆರಿಸುವಷ್ಟೇ ಕಠಿಣ. ಎಲ್ಲೆಲ್ಲೋ ಹುಡುಕುವುದು, ಯ್ಯಾರ್ಯಾರನ್ನೋ ಕಾಡುವುದು, ನಿಮ್ಮ ಮನಸ್ಸನ್ನೇ ಕೆದಕಿ, ಹುರಿದು, ತೊಳೆದು ಇನ್ನೆಲ್ಲಾ ಕ್ರಿಯೆಯಿಂದ ಹೊರಬಂದದ್ದು ಅದು.
ನನಗೆ ಹೀಗೇ ಆಯಿತು. ನಾನು ಮನೆಗೆ ಹೆಸರಿಡಲು ಯೋಚಿಸಿದಾಗ ಮೊದಲು ಹೊಳೆದದ್ದು 'ಪ್ರಶಾಂತಿ'. ಈ ಹೆಸರನ್ನು ಆಗಾಗಲೇ ಸತ್ಯಸಾಯಿಬಾಬಾ ನಗರಕ್ಕೇ ಇಟ್ಟುಬಿಟ್ಟಿದ್ದು ಯಾರೋ ನನಗೆ ತಿವಿದು ಹೇಳಿದರು. ಇದನ್ನು ಕೈ ಬಿಟ್ಟೆ. ಹೆಸರನ್ನು ಹುಡುಕುವ ಕೆಲಸದಲ್ಲಿ ನಾನು ಇರುತ್ತಿದ್ದಾಗ ಇತರರ ಕೌಶಲ್ಯವನ್ನು ಮೆಚ್ಚುವ ಅವಕಾಶ ಸಿಕ್ಕಿತು. ಆಹಾ ಎಂಥಾ ಹೆಸರುಗಳನ್ನು ಯೋಚಿಸಿದ್ದಾರೆ--"ಮಂದಾರ", 'ಕನಸು", ಈ ಪಟ್ಟಿಯನ್ನು ಬೆಳೆಸಲು ಇಷ್ಟವಿಲ್ಲ. ಏಕೆಂದರೆ ನನ್ನ ಬೆನ್ನು ತಟ್ಟಿಕೊಳ್ಳಲು ಆಗುವುದಿಲ್ಲವಲ್ಲ!

ನನಗೆ ಗೊತ್ತಿದ್ದ ಒಬ್ಬರು ತಮ್ಮ ಮನೆ ಮಾರಾಟಮಾಡಿದ ಮೇಲೂ ಆ ಮನೆಗೆ ಅವರು ಇಟ್ಟಿದ್ದ ಹೆಸರನ್ನೇ ಮುಂದುವರಿಸಿರೆಂದು ಕೊಡುಕೊಂಡವರಿಗೆ ದುಂಬಾಲು ಬಿದ್ದಿದ್ದು ನೋಡಿದ್ದೇನೆ. ಏನೋ, ಏಕೋ, ಮನೆಕೊಂಡು ಕೊಂಡವರು ಆ ಮನೆಯನ್ನು ನವೀಕರಿಸಿದರೂ ಅದೇ ಹೆಸರನ್ನು ಮುಂದುವರಿಸಿದರು. ಇನ್ನೊಬ್ಬರು ಮನೆ ಮಾರಾಟಮಾದಿದಾಗ ಮನೆಯ ಹೆಸರಿನ ಫಲಕವನ್ನು ಕಿತ್ತು ಮುಂದೆ ತಾವು ಕಟ್ಟುವ ಮನೆಗೆ ಬೇಕೆಂದು ತೆಗೆದುಕೊಂಡು ಹೋದರು.  

ಆಮೇಲೆ ಇಡೋಣವೆಂದು ಮನೆಯ ಕಾಪೌಂಡ್‌ನ ಕಂಭದಲ್ಲಿ ಬಾಗಿಲಿನ ಹೆಸರು ಕೆತ್ತಿದ ಕಲ್ಲು ಇಡುವ ಮೀಸಲು ಜಾಗವನ್ನು ಖಾಲಿ ಬಿಟ್ಟೆ. ಈಗಲೋ ಆಗಲೋ ಈ ಕೆಲಸ ಮುಗಿಸಬೇಕೆಂದು ಇದ್ದವನಿಗೆ ಎಷ್ಟು ಕಾಲ ಹಿಡಿಯಿತು ಗೊತ್ತೇ? ಕೇವಲ ಮೂವತ್ತು ವರ್ಷ. ಇರಲಿ, ಇದು ಹೇಗೆ ಕೊನೆಗೊಂಡಿತು ಅಂದರೆ ಹುದುಕಿ ಹುಡುಕಿ ಅದನ್ನು ನಿಲ್ಲಿಸಿಯೇ ಬಿಟ್ಟೆ! ಆದರೂ ಅದು ನಿಜವಾದ ಕೊನೆಯಲ್ಲ. ನಮ್ಮ ಮನೆಗೆ ಹೆಸರು ಬಂದೇ ಬಂತು. ನನ್ನ ಮೊದಲನೆ ಮಗಳಿಗೆ ಹೆಸರಿಡುವಾಗ ಮಾಡಿದ್ದ ಕಸರತ್ತು ಕೆಲಸಕ್ಕೆ ಬಂತು. ಅವಳಿಗೆ "ನಿರುಪಮ" ಎಂದು ಹೆಸರಿಟ್ಟಾಗ ಆಗಿದ್ದ ಸಂತೋಷ ಅಷ್ಟಿಷ್ಟಲ್ಲ. ಮನೆಗೂ ಅದೇ ಹೆಸರಿಟ್ಟು ಬಿಟ್ಟೆವು, ಅವಳ ನೆನಪಿಗಾಗಿ, ಅವಳು ನಮ್ಮನ್ನು ಅಗಲಿದ ಮೇಲೆ. ಹೆಸರು ಕೆತ್ತಿದ ಕಲ್ಲು ಇಡುವ ಮೀಸಲು ಜಾಗ ಈಗ ತುಂಬಿದೆ!   

Thursday, July 25, 2013

ಅಳಿಸಿಹೋದ ಕೆಲವು ಹಳೆಯ ಪದ್ಧತಿಗಳು

                                                                   ಕೆಲವು ಹಳೆಯ ಪದ್ಧತಿಗಳು

೧. ಎಣ್ಣೆಯನ್ನು ತುಂಬಿದ ಇನ್ಸುಲೇಟರುಗಳು
                     
ಸಮುದ್ರ ತೀರದಲ್ಲಿ ಗಾಳಿಯಲ್ಲಿ ತೇವ ಮತ್ತು ಉಪ್ಪಿನ ಅಂಶ ಹೆಚ್ಚಾಗಿರುವುದರಿಂದ ಟೆಲೆಗ್ರಾಫ್ ತಂತಿಗಳಿಂದ ವಿದ್ಯುತ್ ಭೂಮಿಗೆ ಸೋರುವುದನ್ನು ಕಡಿಮೆ ಮಾಡಲು ಇನ್ಸುಲೇಟರುಗಳ ಒಳಗೆ ಎಣ್ಣೆಯನ್ನು ತುಂಬುತ್ತಿದ್ದರು. ಇದು ವಿದ್ಯುತ್ ಭೂಮಿಗೆ
ಸೋರುವುದನ್ನು ಸರ್ವತ್ರ ತಡೆಯುವುದೆಂದು ತಿಳಿಯಬಾರದು. ಎಣ್ಣೆಯ ಮೇಲ್ಭಾಗದಲ್ಲೂ ಉಪ್ಪು ಪದರ ಕ್ರಮೇಣ ಹರಡಿ ಇನ್ಸುಲೇಟರುಗಳ ಕಾರ್ಯಕ್ಷಮತೆ ತಗ್ಗುತ್ತಿತ್ತು. ಅದಕ್ಕಾಗಿ ೩ ವರ್ಷಗಳಿಗೊಮ್ಮೆ ಆ ಎಣ್ಣೆಯನ್ನು ನವೀಕರಿಸಲಾಗುತ್ತಿತ್ತು

೨.ನಾಲ್ಕು ತಂತಿಯ ತಂತಿಯಿಂದ ಮೂರು ಟೆಲಿಫೋನ್ ಸಂಪರ್ಕ



ನಾಲ್ಕು ತಂತಿಯ ತಂತಿಯಿಂದ ಎರಡು ಟೆಲಿಫೋನ್ ಸಂಪರ್ಕ ತಯಾರು ಆಗುವುದು ಸಹಜ. ಮೂರನೆಯದು 'ಫ್ಯಾಂಟಮ್'  ಅದು ಸಮತೋಲನವುಳ್ಳ ಟ್ರಾನ್ಸಫಾರ್ಮರ್‌ಗಳನ್ನು
ಉಪಯೋಗಿಸಿ ಪಡೆಯುವಂಥದ್ದು. ಈಗಿನ ಸಜೀವ ಕ್ಯಾರಿಯರ್ ವ್ಯವಸ್ಥೆಯ ಜಡ ರೂಪ.

೩.ಆಗಾಗಲೇ ಇದ್ದ ಲೈನ್‌ಗಳನ್ನು ಉಪಯೋಗಿಸಿಕೊಂಡು ಹೆಚ್ಚು ಚಾನೆಲ್‌ಗಳನ್ನು ಹರಿಸಲು ಮಾಡಿಕೊಂಡ ಉಪಾಯ



ಕ್ರಾಸ್‌ಟಾಕ್ ಅಂದರೆ ಒಂದು ಚಾನೆಲ್‌ನಿಂದ ಇನ್ನೊಂದು ಚಾನೆಲ್‌ಗೆ ಸೋರುವ ವಿದ್ಯುತ್‌ನಿಂದ ಉಂಟಾಗುವ ತೊಂದರೆ..
ಇದನ್ನು ತಪ್ಪಿಸಲು ಇದ್ದ ವ್ಯವಸ್ಥೆಯೆಂದರೆ ಒಂದು ತಂತಿ ಜೋಡಿಯ ಮಧ್ಯೆ ಅಂತರ ಕಡಿಮೆ ಮಾಡುವುದು; ಒಂದು ಜೋಡಿಯ ಒಂದೊಂದು ತಂತಿಯನ್ನು ಬಹಳ ದೂರ ಸಮಾನಾತರವಾಗಿರದಂತೆ ನೋಡಿಕೊಳ್ಳುವುದು ಮತ್ತು ಒಂದು ಜೋಡಿಯಿಂದ ಇನ್ನೊಂದು ಜೋಡಿಗೆ ದೂರ ಹೆಚ್ಚಿಸುವುದು. ಒಂದು ಟೆಲಿಫೋನ್‌ ಜೋಡಿ ತಂತಿಯಿಂದ ಸಮೀಪದಲ್ಲಿರುವ ಟೆಲಿಫೋನ್‌ ಜೋಡಿಗಳಿಗೆ ಕ್ರಾಸ್‌ಟಾಕ್ ತಪ್ಪಿಸಲು ಇದ್ದ ವ್ಯವಸ್ಥೆಯು ಉತ್ತಮಪಡಿಸಲು ಹೆಚ್ಚಿನ ಚಾನೆಲ್‌ಗಳನ್ನು ಹೊತ್ತಿರುವ ಜೋಡಿ ತಂತಿಗಳ ಮಧ್ಯೆ ಅಂತರ ಕಡಿಮೆ ಮಾಡುವುದು ಮತ್ತು  ಕಡಿಮೆ ಚಾನೆಲ್‌ಗಳನ್ನು ಹೊತ್ತಿರುವ ಜೋಡಿಯಿಂದ ದೂರವಿರಿಸುವುದು  

ಮುಂದುವರೆಯುವುದು